ಆ ಒಂದು ಹೆಸರು, ಆ ಒಂದೇ ಒಂದು ಹೆಸರು ನೆರೆದಿರುವ ಪ್ರೇಕ್ಷಕರನ್ನು ರೋಮಾಂಚನಗಳಿಸುತ್ತದೆ. ಆ ನಾಯಕ ಆಗಸದೆತ್ತರದಲ್ಲಿ ಹೆಲಿಕಾಪ್ಟರ್ನಲ್ಲಿ 🚁 ಹಾರಾಡುತ್ತಿದ್ದರೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟುತ್ತದೆ. ಆ ನಾಯಕ ಭಾಷಣ ಮಾಡಲು ನಿಂತರೆ ಎದುರಾಳಿಗಳ ಮೈಯಲ್ಲಿ ನಡುಕ ಶುರುವಾಗುತ್ತದೆ. ಹೌದು “ಮೋದಿ” ಈ ಎರಡಕ್ಷರದ ಶಬ್ದ ಎಷ್ಟು ಪವರ್ ಫುಲ್ ಗೊತ್ತ.
ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಧೀಮಂತ ನಾಯಕ. ಇವರು 2001 ರಲ್ಲಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಎಲ್ಲ ವಿಪಕ್ಷ, ಮಾಧ್ಯಮಗಳು ಮೋದಿಯವರನ್ನು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯಲ್ಲಿ ಸಿಲುಕಿಸಲು ಪ್ರಯತ್ನ ಮಾಡ್ತಾನೆ ಇದ್ರು. ಗೊಧ್ರಾದಲ್ಲಿ ಗಲಭೆ ಎಬ್ಬಿಸಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿದರು. ಟೆರರಿಸ್ಟಗಳನ್ನು ಕಳಿಸಿ ಸಾಯಿಸುವ ವಿಫಲ ಯತ್ನ ಮಾಡಿದರು. ಎಷ್ಟು ಕೀಳು ಮಟ್ಟ ಅಂದ್ರೆ ವಿಪಕ್ಷಗಳು ಟೆರರಿಸ್ಟಗಳ ಪರ ವಹಿಸಿ ಮಾತನಾಡಿದರು. 2002 ರಿಂದ ಕಳೆದ ಎರಡು ವರ್ಷಗಳ ತನಕ ಕೇವಲ ಒಂದು ವಿಷಯವನ್ನು ಹಿಡ್ಕೊಂಡು 2014ರ ಚುನಾವಣೆಯಲ್ಲಿ ಸೋಲಿಸುವ ಪ್ರಯತ್ನ ಮಾಡಿದರು. ಆದರೆ ಮೋದಿಯವರ ಅಭಿವೃದ್ಧಿ ಮಂತ್ರ ಮತ್ತು ಹಿಂದುತ್ವದ ಮೇಲಿನ ಅಭಿಮಾನ ಅವರನ್ನು ಭವ್ಯ ಭಾರತದ ಪ್ರಧಾನಿಯನ್ನಾಗಿ ಮಾಡಿತು.
ಇವರೆಂದರೇ ಕೋಟ್ಯಾಂತರ ಜನರಿಗೆ ಅಚ್ಚು ಮೆಚ್ಚು ಹಾಗೆಯೇ ಇನ್ನು ಕೆಲವು ದೇಶದ್ರೋಹಿಗಳಿಗೆ ಸಿಂಹಸ್ವಪ್ನ.
ಇದಕ್ಕೆ ತುಂಬಾ ಒಳ್ಳೆಯ ಉದಾಹರಣೆ ಮೊನ್ನೆ ಫೆ. 4ರಂದು ನಡೆದ ಪರಿವರ್ತನಾ ಯಾತ್ರೆಯಲ್ಲಿನ ಝಲಕ್. ಹಿಂದೆ ಅಮಿತ್ ಶಾರವರು ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಎಲ್ಲಾ ಬೆಂಬಲಿಗ ಸಂಘಟನೆಗಳನ್ನು ಸೇರಿಸಿ ಬಂದ್ಗೆ ಕರೆ ನೀಡಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಸೇರಿ ಬಂದ್ ಮಾಡಿಸಿದವರಿಗೆ ಸರಿಯಾಗಿಯೇ ಜಾಡಿಸಿದ್ದರು.
ಅಮಿತ್ ಶಾ, ಮೋದಿಯವರು ಗುಜರಾತಿನವರು ಅವರಿಂದ ಕನ್ನಡಕ್ಕೆ ಕನ್ನಡಿಗರಿಗೆ ಏನು ಉಪಯೋಗವಾಗದು ಅಂತ ಹೇಳ್ತಾ ಇದ್ರು ಸಿಎಂ ಸಿದ್ದರಾಮಯ್ಯನವರು. ಆದರೆ ಇವರಿಬ್ಬರ ಕಾರ್ಯಕ್ರಮಕ್ಕೆ ಜನ ಬೆಂಬಲ ನೋಡಿಯೇ ಬೆಚ್ಚಿ ಬಿದ್ದಿದ್ದರು. ಅದರಲ್ಲೂ ಮೋದಿಜಿಯವರ ಕಾರ್ಯಕ್ರಮಕ್ಕಂತು ಸೇರಿದ ಜನಸಾಗರ ನೋಡಿ ವಿರೋಧಿಗಳಿಗೆ ಬರ್ನಾಲ್ ಗಳೇ ಸಾಕಾಗಿರ್ಲಿಲ್ಲ ಅನ್ನೋ ಸುದ್ದಿ ಬಂತು😀. ಕನ್ನಡಿಗರು ಪರ ರಾಜ್ಯದ ಜನರನ್ನು ಸಹೋದರಂತೆ ಕಾಣುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ರಾಜ್ಯ ರಾಜ್ಯಗಳ ಮಧ್ಯೆ ಕಿಚ್ಚು ಹಚ್ಚುವ ಪ್ರಯತ್ನ ಮಾಡ್ತಾ ಇದೆ.
ಮೋದಿ ಒಂಥರಾ ಸುನಾಮಿ ಇದ್ದ ಹಾಗೆ, ಅವರ ಒಳ್ಳೆಯತನ, ದೇಶ ಸೇವೆಯ ಮೇಲಿನ ಶ್ರದ್ಧೆ, ಹಿಂದುತ್ವದ ಮೇಲಿನ ಪ್ರೀತಿ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅವರು ಹೇಳೋ ಒಂದೊಂದು ಮಾತಿಗೆ ಜನ ಗೌರವ ಕೊಡ್ತಾರೆ. ಏನೇ ಆಗಲಿ ಅವರ ಮೂರುವರೆ ವರ್ಷಗಳ ಆಡಳಿತ ವಿಪಕ್ಷಗಳಿಗೆ ತಲೆ ನೋವಾಗಿದೆ ಅನ್ನೋದರಲ್ಲಿ ಸಂಶಯನೇ ಇಲ್ಲ.
ಇಂತಹ ಮಹಾನ್ ನಾಯಕ ನಮಗೆ ದೊರಕಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ. ಯಾವ ರಾಜಕಾರಣಿಗಳು ಮೋದಿಯವರ ತರಹ ನಿದ್ದೆ ಬಿಟ್ಟು ದೇಶಕ್ಕಾಗಿ ಹಗಳಿರುಳು ಶ್ರಮಿಸ್ತಾರೆ ಹೇಳಿ. ಯಾವುದೇ ಸ್ವಾರ್ಥ ಮತ್ತು ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸುವುದು ಸುಲಭದ ಮಾತಲ್ಲ. ಏನೇ ಆಗಲಿ ಇಂತಹ ಮಹಾನ್ ನಾಯಕನನ್ನು ಮತ್ತೆ ಚುನಾಯಿಸಿ ಭಾರತದ ಪ್ರಧಾನಿಯನ್ನಾಗಿ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.
ರಿಂದ
56"

Comments
Post a Comment